ಜೈಪುರ್: ನೀಟ್ ಪ್ರತಿಭಟನೆ ಯಶಸ್ಸಿನ ನಂತರ ಕಾಕ್ರೋಚ್ ಜನತಾ ಪಾರ್ಟಿ ಸರ್ಕಾರಿ ಶಾಲೆಗಳಲ್ಲಿನ ಅವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ಸರ್ಕಾರಿ ಶಾಲೆಗಳನ್ನು ಸರಿಪಡಿಸಿ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.
ಈ ಅಭಿಯಯಾನದ ಭಾಗವಾಗಿ ಸಿಜೆಪಿ ವಕ್ತಾರ, ಆಶುತೋಷ್ ರಾಂಕಾ ನೇತೃತ್ವದಲ್ಲಿ ಜೈಪುರದ, ರಾಮಪುರದ ಶಾಲೆಯೊಂದಕ್ಕೆ ಬೇಟಿ ನೀಡಲು ಮುಂದಾದಾಗ ಸ್ಥಳೀಯರು ಮತ್ತು ಸಿಜೆಪಿ ಕಾರ್ಯಕರ್ತ ರ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಇವರೆಲ್ಲಾ ಬಿಜೆಪಿ ಗೂಂಡಾಗಳು!
ಈ ಘಟನೆ ಬಗ್ಗೆ ಮಾತನಾಡಿರುವ ಆಶುತೋಷ್ ರಾಂಕಾ, ನಮಗೆ ರಾಮಾಪುರದ ಸರ್ಕಾರಿ ಶಾಲೆಯಲ್ಲಿ ಅಕ್ರಮ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಸ್ಥಳೀಯ ಆಡಳಿತ ಸರ್ಕಾರದಿಂದ ಮಂಜೂರಾದ 12.50 ಲಕ್ಷ ಹಣವನ್ನು ಖಬಳಿಸಿದ್ದಾರೆ. ಇದರ ಬಗ್ಗೆ ನಾವು ಪ್ರಶ್ನೆ ಮಾಡಲು ಶಾಲೆಗೆ ತೆರಳಲು ಮುಂದಾದಾ ಕೆಲವು ಜನರು ನಮ್ಮನ್ನು ತಡೆದಿದ್ದಾರೆ
ಒಂದು ಕಡೆ ಕಾಕ್ರೋಚ್ ಪಾರ್ಟಿ ತಮ್ಮ ಮೇಲೆ ದಾಳಿ ಮಾಡಿದವರು ಬಿಜೆಪಿ ಗೂಂಡಾಗಳೆಂದು ಹೇಳುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ ನಾಯಕರು ಗ್ರಾಮಸ್ಥರ ಕ್ರಮವನ್ನು ಬೆಂಬಲಿಸುತ್ತಿದ್ದಾರೆ.
ಗ್ರಾಮಸ್ಥರಿಗೆ ದೆಹಲಿಯಲ್ಲಿ ಈ ಜಿರಳೆಗಳು ನಿರ್ಮಾಣ ಮಾಡಿದ್ದ ಪರಿಸ್ಥಿತಿ ಬಗ್ಗೆ ಅರಿವಿದೆ. ಇಂತಹ ಕೆಟ್ಟ ಹುಳುಗಳು ನಮ್ಮ ಊರಿಗೆ ಬಂದು, ಊರಿನ ಹೆಸರನ್ನು ಹಾಳು ಮಾಡದಿರಲಿ ಎಂದು ಸರಿಯಾದ ಕ್ರಮ ಕೈಗೊಂಡಿದ್ದಾರೆಂದು ಬಿಜೆಪಿ ಎಂಎಲ್ಎ ಬಾಲ ಮುಕ್ಕುಂದಾಚಾರ್ಯ ಹೇಳಿದ್ದಾರೆ.
ಬಿಜೆಪಿ ಎಂಎಲ್ಎ ಗೋಪಾಲ್ ಶರ್ಮಾ, ಯಾರು ಈ ಸಿಜೆಪಿ? ಇವರು ನಮ್ಮ ಯುವ ಪೀಳಿಗೆಯ ನಾಯಕರೇ? ಇವರು ಜೆನ್-ಜೀ ನಾಯಕರೇ? ಖುದಿರಾಮ್ ಬೋಸ್ ರಂತಹ ಐತಿಹಾಸಿಕ ವ್ಯಕ್ತಿತ್ವಗಳು ನಮ್ಮ ಜೆನ್- ಜೀ ನಾಯಕರಾಗಿದ್ದಾರೆ. ದೇಶವಿರೋಧಿ ಹೇಳಿಕೆ ನೀಡುವ, ದೇಶವನ್ನು ಇಬ್ಭಾಗ ಮಾಡಲು ಮುಂದಾಗುವ ಜನರಿಗೆ ನಮ್ಮ ರಾಮಪುರ್ ನಿವಾಸಿಗಳು ತಕ್ಕ ಪಾಠವನ್ನು ಕಲಿಸಿದ್ದಾರೆಂದು ಹೇಳಿದ್ದಾರೆ,








