ರಸ್ತೆಯಲ್ಲಿ ಅಪಘಾತ ಸಂಭವಿಸಿದಾಗ ಗಾಯಾಳುಗಳಿಗೆ ನೆರವಾಗುವುದು, ಚಾಲಕನ ಜೀವ ಉಳಿಸುವುದು ನಾಗರಿಕ ಸಮಾಜದ ಮೊದಲ ಕರ್ತವ್ಯ. ಆದರೆ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ನಮ್ಮ ಸಮಾಜದ ನಾಗರಿಕ ಪ್ರಜ್ಞೆ ಮತ್ತು ಸಹಾನುಭೂತಿಯನ್ನು ಅಣಕಿಸುವಂತಿದೆ.
ಅಪಘಾತಕ್ಕೀಡಾಗಿ ಪಲ್ಟಿಯಾದ ಟ್ರಕ್ನಿಂದ ಮಾವಿನ ಹಣ್ಣುಗಳನ್ನು ಕದಿಯಲು ಜನರು ಮುಗಿಬಿದ್ದಿರುವ ದೃಶ್ಯ ಆನ್ಲೈನ್ನಲ್ಲಿ ಭಾರಿ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ವೈರಲ್ ವಿಡಿಯೋದಲ್ಲೇನಿದೆ?
ವೈರಲ್ ಆಗಿರುವ ವಿಡಿಯೋದಲ್ಲಿ, ಹೆದ್ದಾರಿಯೊಂದರಲ್ಲಿ ಮಾವಿನ ಹಣ್ಣುಗಳನ್ನು ಸಾಗಿಸುತ್ತಿದ್ದ ದೊಡ್ಡ ಟ್ರಕ್ವೊಂದು ಪಲ್ಟಿಯಾಗಿರುವುದನ್ನು ಕಾಣಬಹುದು. ಆದಾಗ್ಯೂ, ಅಪಘಾತದ ತೀವ್ರತೆಗೆ ಟ್ರಕ್ನಲ್ಲಿದ್ದ ನೂರಾರು ಕೆಜಿ ತೂಕದ ಮಾವಿನ ಹಣ್ಣುಗಳು ರಸ್ತೆಯುದ್ದಕ್ಕೂ ಬಿದ್ದಿವೆ. ಈ ಸಮಯದಲ್ಲಿ ಚಾಲಕನಿಗೆ ಸಹಾಯ ಮಾಡಬೇಕಿದ್ದ ಸ್ಥಳೀಯರು ಮಾನವೀಯತೆಯನ್ನು ಮರೆತು ಮಾವಿನ ಹಣ್ಣನ್ನು ತೆಗೆದುಕೊಂಡು ಹೋಗಲು ಸಜ್ಜಾಗಿರುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.
ಚೀಲ, ಸೀರೆಗಳಲ್ಲಿ ಮಾವಿನ ಹಣ್ಣುಗಳ ಲೂಟಿ
ಅಪಘಾತದ ಸ್ಥಳದಲ್ಲಿದ್ದ ಜನರು ತಮಗೆ ಬೇಕಾದಷ್ಟು ಮಾವಿನ ಹಣ್ಣನ್ನು ದೊಡ್ಡ ಪ್ಲಾಸ್ಟಿಕ್ ಚೀಲಗಳು, ಗೋಣಿ ಚೀಲಗಳನ್ನು ತಂದು ಹಣ್ಣುಗಳನ್ನು ತುಂಬಿಸಿಕೊಳ್ಳುತ್ತಿದ್ದರೆ, ಇನ್ನು ಕೆಲವು ಮಹಿಳೆಯರು ತಮ್ಮ ಸೀರೆ ಮತ್ತು ದುಪಟ್ಟಾಗಳಲ್ಲಿ ಮಾವಿನ ಹಣ್ಣುಗಳನ್ನು ಬಾಚಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ.
ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆಗಳು
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕ ನೆಟ್ಟಿಗರು ಜನರ ಈ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಕಾಮೆಂಟ್ ಮಾಡಿರುವ ಒಬ್ಬ ಬಳಕೆದಾರರು, ಇದು ನಮ್ಮ ದೇಶದಲ್ಲಿ ಹೆಚ್ಚಾಗುತ್ತಿರುವ ವಿಶ್ವಾಸ-ಕಡಿಮೆ ಸಮಾಜದ ಸ್ಪಷ್ಟ ಸಂಕೇತವಾಗಿದೆ. ಇಲ್ಲಿ ಸಾರ್ವಜನಿಕರಿಗೆ ಕಾನೂನಿನ ಭಯವಾಗಲಿ ಅಥವಾ ಪರರ ಮೇಲಿನ ಸಹಾನುಭೂತಿಯಾಗಲಿ ಉಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೊಬ್ಬ ಬಳಕೆದಾರರಿಗೆ ಅದಕ್ಕಾಗಿಯೇ ನಾವು ಮಾನವೀಯತೆ ಸತ್ತಿದೆ ಎಂದು ಹೇಳುತ್ತೇವೆ. ಇತ್ತೀಚಿನ ದಿನಗಳಲ್ಲಿ ಜನರು ಹೇಗೆ ಇಷ್ಟೊಂದು ಅಸಂಸ್ಕೃತರಾಗಿದ್ದಾರೆ? ಇಲ್ಲಿ ಜನರು ಸಾಯುವ ಅಂಚಿನಲ್ಲಿರುವವರಿಗೆ ಸಹಾಯ ಮಾಡುವುದಿಲ್ಲ. ಅಪಘಾತದ ಸ್ಥಳದಿಂದ ಕದಿಯಬಾರದು ಎಂಬ ಮೂಲಭೂತ ಸಭ್ಯತೆ ಅವರಲ್ಲಿರಬೇಕು ಎಂದು ನಿರೀಕ್ಷಿಸುವುದು ತುಂಬಾ ಬೇಡಿಕೆಯಂತೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.








