ಮಂಗಳೂರು: ಸಹಸ್ರಾರು ವರ್ಷಗಳ ಇತಿಹಾಸವಿರುವ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರ, ಕೊಡಿಯಾಲ್ ಬೈಲ್ನ ಭಂಡಾರ ಗುಡಿ ಹಾಗೂ ನೂತನ ಕಟ್ಟಡಕ್ಕೆ 9 ಲಕ್ಷ ಮೌಲ್ಯದ 58.5 KVA ಜನರೇಟರ್ ಮತ್ತು ಪ್ಯಾನೆಲ್ ವ್ಯವಸ್ಥೆಯ ದಾನಿಗಳದ ಲೋಕೇಶ್ ಬೋಳಾರ್ ದಂಪತಿಯಿಂದ ಉದ್ಘಾಟನಾ ಕಾರ್ಯಕ್ರಮ ಆಗಸ್ಟ್ 7, 2026ರಂದು ನಡೆಯಿತು.

ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಕೋಶಾಧಿಕಾರಿಯಾಗಿರುವ PMJF Ln ಶ್ರೀ ಲೋಕೇಶ್ ಬೋಳಾರ್ ಹಾಗೂ ಅವರ ಪತ್ನಿ ಶ್ರೀಮತಿ ಜಯಶ್ರೀ ಲೋಕೇಶ್ಅವರು ದಕ್ಷಿಣ ಕನ್ನಡ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ವೇದವ್ಯಾಸ ಕಾಮತ್ ಅವರ ಉಪಸ್ಥಿತಿಯಲ್ಲಿ 9 ಲಕ್ಷ ಮೌಲ್ಯದ ಜನರೇಟರ್ ಮತ್ತು ಪ್ಯಾನೆಲ್ ವ್ಯವಸ್ಥೆಯನ್ನು ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಆಚಾರ ಪಟ್ಟವರು ಮತ್ತು ಗುರಿಕಾರರು, ಅಧ್ಯಕ್ಷರಾದ ಶ್ರೀ ಗಣೇಶ್ ಕುಂಟಲ್ಪಾಡಿ, ಆಡಳಿತ ಮೊಕ್ತೇಸರರಾದ ವಿಶ್ವನಾಥ್ ಮಂಕಿಸ್ಟ್ಯಾಂಡ್, ಕಾರ್ಯದರ್ಶಿ ಸುಧೀರ್ ಬಿ ಜಪ್ಪು, ಮೊಕ್ತೇಸರರಾದ ಸುಜನ್ ದಾಸ್ ಕುಡುಪು, ರವೀಂದ್ರ ಕೆ, ಶ್ರೀಮತಿ ಉಷಾ ಪ್ರಭಾಕರ್, ಸರಳ ನಾಗೇಶ್ ಮಹಿಳಾ ಸಮಿತಿ ಅಧ್ಯಕ್ಷೆ ಆಶಾ ಚಂದ್ರ ಮೋಹನ್, ಯುವಜನ ಸೇವಾ ಸಮಿತಿ ಅಧ್ಯಕ್ಷರಾದ ಜಗದೀಶ್ ಕದ್ರಿ, ಕ್ಷೇತ್ರದ ಸೇವಾ ಸಮಿತಿಯ ಸದಸ್ಯರು, ಮಹಿಳಾ ಸಮಿತಿಯ ಸದಸ್ಯರು ಹಾಗೂ ಜೀರ್ಣೋದ್ದಾರ ಸಮಿತಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.









