Close Menu
    What's Hot

    ಕನಸಿನಲ್ಲಿ ಬಂದ ಸ್ವಾಮೀಜಿ, ಮರು ಅಂತ್ಯಕ್ರಿಯೆಗೆ ಸೂಚನೆ; 8 ತಿಂಗಳ ಬಳಿಕ ದೇಹ ನೋಡಿ ಭಕ್ತರಿಗೆ ಅಚ್ಚರಿ

    September 3, 2026

    ಕರಡು ಮತದಾರರ ಪಟ್ಟಿಯಿಂದ ರಾಘವ್ ಚಡ್ಡಾ ಹೆಸರು ಡಿಲೀಟ್; ‘ರಾಜಕೀಯ ಸೇಡು’ ಆರೋಪ

    September 3, 2026

    8 ತಿಂಗಳ ಮಗುವಿನ ಡೈಪರ್‌ನಲ್ಲಿ ₹50 ಲಕ್ಷದ ಚಿನ್ನ; ಕ್ಯಾಲಿಕಟ್ ವಿಮಾನ ನಿಲ್ದಾಣದಲ್ಲಿ ಕಳ್ಳಸಾಗಣೆ ಯತ್ನ ಬಯಲು

    September 3, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»‘ಸುಕುಮಾರ ಕುರುಪ್ ಇನ್ನೂ ಜೀವಂತ’ 42 ವರ್ಷಗಳ ಬಳಿಕ ನಿವೃತ್ತ ಪೊಲೀಸ್ ಅಧಿಕಾರಿಯಿಂದ ಸ್ಫೋಟಕ ಹೇಳಿಕೆ
    ಅಪರಾಧ

    ‘ಸುಕುಮಾರ ಕುರುಪ್ ಇನ್ನೂ ಜೀವಂತ’ 42 ವರ್ಷಗಳ ಬಳಿಕ ನಿವೃತ್ತ ಪೊಲೀಸ್ ಅಧಿಕಾರಿಯಿಂದ ಸ್ಫೋಟಕ ಹೇಳಿಕೆ

    adminBy adminAugust 28, 2026No Comments2 Mins Read

    ಅಲಪ್ಪುಳ : ಕೇರಳದ ಅತ್ಯಂತ ಕುಖ್ಯಾತ ಮತ್ತು ದೀರ್ಘಕಾಲದಿಂದ ತಲೆಮರೆಸಿಕೊಂಡಿರುವ ಅಪರಾಧಿ ಸುಕುಮಾರ ಕುರುಪ್ ಕಥೆಗೆ 42 ವರ್ಷಗಳ ನಂತರ ಮತ್ತೊಮ್ಮೆ ಹೊಸ ತಿರುವು ಸಿಕ್ಕಿದೆ. ತನಿಖಾ ತಂಡದಲ್ಲಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಅಲಿ ಅಕ್ಬರ್ ನೀಡಿರುವ ಹೊಸ ಹೇಳಿಕೆಯು ಈ ನಿಗೂಢತೆಯನ್ನು ಮತ್ತೆ ಸಜೀವಗೊಳಿಸಿದೆ.

    ನಿವೃತ್ತ ಅಧಿಕಾರಿ ಅಲಿ ಅಕ್ಬರ್ ಅವರ ಪ್ರಕಾರ, ಸುಕುಮಾರ ಕುರುಪ್ ಇನ್ನೂ ಜೀವಂತವಾಗಿದ್ದು, ಬ್ರೂನಿಯಲ್ಲಿ ಇಂಡೋ-ಮಲೇಷಿಯನ್ ಮೂಲದ ವ್ಯಕ್ತಿಯಾಗಿ ನಕಲಿ ಗುರುತಿಸಿಕೊಳ್ಳುವ ಮೂಲಕ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾನೆ. ಕುರುಪ್ ನ ಛಾಯಾಚಿತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಅಕ್ಬರ್, ಆತ ತನ್ನ ಪತ್ನಿ, ವಿದೇಶದಲ್ಲಿರುವ ಸಂಬಂಧಿಕರು ಹಾಗೂ ಪ್ರಭಾವಿ ರಾಜಕೀಯ ಮತ್ತು ಸಮುದಾಯದ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾನೆ ಎಂದು ಆರೋಪಿಸಿದ್ದಾರೆ.

    ಈ ಹೊಸ ವಿವರಣೆಯ ಕುರಿತು ಪ್ರತಿಕ್ರಿಯಿಸಿದ ಅಪರಾಧ ವಿಭಾಗದ ಮುಖ್ಯಸ್ಥ ಎಡಿಜಿಪಿ ಎಚ್. ವೆಂಕಿತೇಶ್, “ಬಹಿರಂಗವಾಗಿರುವ ಛಾಯಾಚಿತ್ರ, ಪಾಸ್‌ಪೋರ್ಟ್ ಹಾಗೂ ಮೊಬೈಲ್ ಸಂಖ್ಯೆಗಳ ಕುರಿತು ಮಾಹಿತಿ ಪಡೆಯಲು ಇಂಟರ್‌ಪೋಲ್  ಅನ್ನು ಸಂಪರ್ಕಿಸಲಾಗುವುದು. ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರ ನಿರ್ದೇಶನದಂತೆ ತನಿಖೆ ನಡೆಸಲಾಗುವುದು,” ಎಂದಿದ್ದಾರೆ.
    ಆದರೆ, ಅಪರಾಧ ವಿಭಾಗದ ಎಸ್‌ಪಿ ಜಿಲ್ಸನ್ ಮ್ಯಾಥ್ಯೂ ಮಾತನಾಡಿ, “ಅಕ್ಬರ್ ಅವರ ಬಳಿ ಇಂತಹ ಸಾಕ್ಷ್ಯಾಧಾರಗಳಿದ್ದರೆ ಅವರು ಮಾಧ್ಯಮಗಳಿಗಿಂತ ಮುಂಚಿತವಾಗಿ ತನಿಖಾ ಸಂಸ್ಥೆಗೆ ನೀಡಬೇಕಿತ್ತು,” ಎಂದು ಪ್ರಶ್ನಿಸಿದ್ದಾರೆ.

    ಪ್ರಕರಣದ ಹಳೆಯ ಫೈಲ್‌ಗಳನ್ನು ತೆರವುಗೊಳಿಸುವ ವಿಶೇಷ ಅಭಿಯಾನದ ಭಾಗವಾಗಿ ಅಪರಾಧ ವಿಭಾಗವು 3 ತಿಂಗಳ ಹಿಂದೆ ಈ ಪ್ರಕರಣವನ್ನು ಮರುಪರಿಶೀಲಿಸಿತ್ತು. 1989ರಲ್ಲಿ ಜಾರ್ಖಂಡ್‌ನ ಬೊಕಾರೊ ಆಸ್ಪತ್ರೆಯ ಐಸಿಯುನಲ್ಲಿ ತೀವ್ರ ಎದೆನೋವಿನಿಂದ ದಾಖಲಾಗಿದ್ದ ಕುರುಪ್ ಅವರನ್ನು ನೋಡಿರುವುದಾಗಿ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದ ರತ್ನಮ್ಮ ಎಂಬುವವರು ಹೇಳಿಕೆ ನೀಡಿದ್ದರು. ಈ ಆಧಾರದ ಮೇಲೆ ಮತ್ತು ಕುರುಪ್ ಅವರಿಗೆ ಇದ್ದ ಹೃದಯ ಕಾಯಿಲೆಯನ್ನು ಗಮನಿಸಿದ ತನಿಖಾಧಿಕಾರಿಗಳು, ಆತ 1989ರ ಸುಮಾರಿಗೇ ಸತ್ತಿರಬಹುದು ಎಂದು ತೀರ್ಮಾನಿಸಿದ್ದರು. ಪ್ರಸ್ತುತ ಆತನಿಗೆ 83 ವರ್ಷ ವಯಸ್ಸಾಗಿರುತ್ತಿತ್ತು.

    ಏನಿದು ಭೀಕರ ಚಾಕೊ ಕೊಲೆ ಪ್ರಕರಣ?

    8 ಲಕ್ಷ ರೂಪಾಯಿ ಮೊತ್ತದ ವಿಮಾ ಹಣವನ್ನು ಅಕ್ರಮವಾಗಿ ಪಡೆಯಲು ಸುಕುಮಾರ ಕುರುಪ್ ಮತ್ತು ಆತನ ಸಹಚರರು ಸಂಚು ರೂಪಿಸಿದ್ದರು. ಜನವರಿ 22, 1984 ರಂದು ಅಲಪ್ಪುಳ ಮೂಲದ ಚಲನಚಿತ್ರ ಪ್ರತಿನಿಧಿ ಚಾಕೊ ಎಂಬುವವರನ್ನು ಕೊಲೆ ಮಾಡಿ, ಅವರ ದೇಹವನ್ನು ಕಾರಿನಲ್ಲಿಟ್ಟು ಬೆಂಕಿ ಹಚ್ಚಿ, ಅದು ಕುರುಪ್ ಅವರದ್ದೇ ಮೃತದೇಹ ಎಂದು ಬಿಂಬಿಸಲು ಯತ್ನಿಸಲಾಗಿತ್ತು.
    ಅಂದಿನಿಂದ ಕಣ್ಮರೆಯಾದ ಕುರುಪ್‌ನನ್ನು ಹುಡುಕಲು ಗಲ್ಫ್ ರಾಷ್ಟ್ರಗಳು, ನೇಪಾಳ ಮತ್ತು ಭೂತಾನ್‌ಗಳಲ್ಲೂ ಶೋಧ ನಡೆಸಲಾಯಿತಾದರೂ ಯಾವುದೇ ಸುಳಿವು ಸಿಗಲಿಲ್ಲ.
    ಇನ್ನು ಮಲೆಯಾಳಂನ ನಲ್ಲಿ ಸುಕುಮಾರ ಕುರುಪ್ ಹೆಸರಿನಲ್ಲಿ ಹಲವು ಸಿನೆಮಾಗಳು ತಯಾರಾಗಿದ್ದವು.




    #crime #national
    Previous Articleನಕಲಿ ಔಷಧಿ ಜಾಲದ ಕಿಂಗ್‌ಪಿನ್ ಪ್ರಶಾಂತ್ ಅಜರ್ ಬೈಜಾನ್‌ನಲ್ಲಿ ವಶಕ್ಕೆ; ಭಾರತಕ್ಕೆ ಹಸ್ತಾಂತರಕ್ಕೆ ಸಿದ್ಧತೆ
    Next Article ಕುಡಿದ ಮತ್ತಿನಲ್ಲಿ ಪತ್ನಿಯ ಕೊಲೆ; ಹೃದಯಾಘಾತದ ನಾಟಕವಾಡಿದ ಪತಿ ಅರೆಸ್ಟ್

    Related Posts

    ಕರಡು ಮತದಾರರ ಪಟ್ಟಿಯಿಂದ ರಾಘವ್ ಚಡ್ಡಾ ಹೆಸರು ಡಿಲೀಟ್; ‘ರಾಜಕೀಯ ಸೇಡು’ ಆರೋಪ

    September 3, 2026

    8 ತಿಂಗಳ ಮಗುವಿನ ಡೈಪರ್‌ನಲ್ಲಿ ₹50 ಲಕ್ಷದ ಚಿನ್ನ; ಕ್ಯಾಲಿಕಟ್ ವಿಮಾನ ನಿಲ್ದಾಣದಲ್ಲಿ ಕಳ್ಳಸಾಗಣೆ ಯತ್ನ ಬಯಲು

    September 3, 2026

    ‌ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆ; ಪೋಷಕರಿಂದ ಕೊಲೆ ಆರೋಪ

    September 3, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಕನಸಿನಲ್ಲಿ ಬಂದ ಸ್ವಾಮೀಜಿ, ಮರು ಅಂತ್ಯಕ್ರಿಯೆಗೆ ಸೂಚನೆ; 8 ತಿಂಗಳ ಬಳಿಕ ದೇಹ ನೋಡಿ ಭಕ್ತರಿಗೆ ಅಚ್ಚರಿ

    September 3, 2026

    ಕರಡು ಮತದಾರರ ಪಟ್ಟಿಯಿಂದ ರಾಘವ್ ಚಡ್ಡಾ ಹೆಸರು ಡಿಲೀಟ್; ‘ರಾಜಕೀಯ ಸೇಡು’ ಆರೋಪ

    September 3, 2026

    8 ತಿಂಗಳ ಮಗುವಿನ ಡೈಪರ್‌ನಲ್ಲಿ ₹50 ಲಕ್ಷದ ಚಿನ್ನ; ಕ್ಯಾಲಿಕಟ್ ವಿಮಾನ ನಿಲ್ದಾಣದಲ್ಲಿ ಕಳ್ಳಸಾಗಣೆ ಯತ್ನ ಬಯಲು

    September 3, 2026

    ‌ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆ; ಪೋಷಕರಿಂದ ಕೊಲೆ ಆರೋಪ

    September 3, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕನಸಿನಲ್ಲಿ ಬಂದ ಸ್ವಾಮೀಜಿ, ಮರು ಅಂತ್ಯಕ್ರಿಯೆಗೆ ಸೂಚನೆ; 8 ತಿಂಗಳ ಬಳಿಕ ದೇಹ ನೋಡಿ ಭಕ್ತರಿಗೆ ಅಚ್ಚರಿ

    September 3, 2026

    ‌ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆ; ಪೋಷಕರಿಂದ ಕೊಲೆ ಆರೋಪ

    September 3, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.