ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿನ ಜುನ್ನಾರ್ ತಹಸಿಲ್ನ ಪಿಂಪಲ್ವಾಂಡಿ ಗ್ರಾಮದಲ್ಲಿ 25 ವರ್ಷದ ಯುವಕನೊಬ್ಬ, 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದ ಭೀಕರ ಕೃತ್ಯ ಬೆಳಕಿಗೆ ಬಂದಿದೆ.
ಸದ್ಯ 25 ವರ್ಷದ ಆರೋಪಿ ಸಾಹಿಲ್ ಖೈರೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಸದ್ಯ ಮಹಾರಾಷ್ಟ್ರದ ಪುಣೆಯಲ್ಲಿ ಎಂಬಾತನು ತಪ್ಪನ್ನು ಒಪ್ಪಿಕೊಂಡಿದ್ದು, ಆತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಮಧ್ಯೆ ಗ್ರಾಮಸ್ಥರು ಆತನಿಗೆ ಗಲ್ಲು ಶಿಕ್ಷೆಯಾಗಲೇ ಬೇಕು ಎಂದು ಒತ್ತಾಯಿಸಿ ಪಿಂಪಲ್ವಾಂಡಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿ, ಆಡಳಿತ ಮಂಡಳಿಗೆ ಎಚ್ಚರಿಕೆ ಕೊಟ್ಟಿರುವ ದೃಶ್ಯಾವಳಿಗಳು ವೈರಲ್ ಆಗುತ್ತಿದೆ.
ಏನಾಗಿತ್ತು?
ಮಂಗಳವಾರ ಮಧ್ಯಾಹ್ನ 3:30ಕ್ಕೆ ಬಾಲಕಿ ತನ್ನ ಮನೆಯಲ್ಲಿ ಟಿವಿ ನೋಡುತ್ತಾ ಕುಳಿತ್ತಿತ್ತು. ಈ ವೇಳೆ ಬಂದ ಈ ಕಾಮುಕ ಬಾಲಕಿಗೆ ಪೇರಳೆ ಹಣ್ಣು ಕೊಟ್ಟಿದ್ದಾನೆ. ನಂತರ ಆಕೆಯನ್ನು, ಕಬ್ಬಿನ ಹೊಲಕ್ಕೆ ಸೈಕಲ್ನಲ್ಲಿ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಅತ್ಯಾಚಾರ ನಡೆಸಿ ಕೊಂದಿದ್ದಾನೆ. ಕತ್ತಲಾಗುತ್ತಿದ್ದರು ಮಗಳು ಬಾರದೆ ಇರುವುದನ್ನು ಕಂಡ ಪೋಷಕರು ಎಲ್ಲೆಡೆ ಹುಡುಕಾಡಿದ್ದಾರೆ. ಕೊನೆಗೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ ಎನ್ನಲಾಗಿದೆ.
ಸೈಕಲ್ನಲ್ಲಿ ಪ್ರಯಾಣ
ಪೋಷಕರ ದೂರಿನ ಮೇರೆಗೆ ತನಿಖೆ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ,. ಈ ವೇಳೆ ಯುವಕನೊಬ್ಬನ ಸೈಕಲ್ನಲ್ಲಿ ಬಾಲಕಿ ಹೋಗುತ್ತಿರವುದು ಕಂಡುಬಂದಿದೆ. ಸೈಕಲ್ ಮತ್ತು ಸದ್ಯ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಆತನು ಕೊಟ್ಟ ಮಾಹಿತಿ ಪ್ರಕಾರ ಯುವತಿಯ ಮೃತದೇಹವನ್ನು ಹುಡುಕಿ ಹೊರತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆಗೆ ಶವವನ್ನು ಕಳುಹಿಸಲಾಗಿದ್ದು, ವಿಧಿವಿಜ್ಞಾನ ತಂಡವು ಕೂಡ ಘಟನಾ ಸ್ಥಳವನ್ನು ಪರಿಶೀಲಿಸಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಿದೆ.
ಪೊಲೀಸರು ಏನಂದ್ರು?
ಪುಣೆ ಗ್ರಾಮೀಣ ಎಸ್ಪಿ ಸಂದೀಪ್ ಗಿಲ್ ಮಾತನಾಡಿ, ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪದಡಿ 25 ವರ್ಷದ ಯುವಕನನ್ನು ಬಂಧಿಸಲಾಗಿದೆ. ಆರೋಪಿಗೆ ಮತ್ತು ಬಾಲಕಿ ಹೆಚ್ಚಾಗಿ ತಿಳಿದಿತ್ತು. ಒಬ್ಬರನೊಬ್ಬರು ಮಾತನಾಡಿಸುತ್ತಿದ್ದರು ಎಂದು ಹೇಳಿದರು.
ಮುಂದುವರೆದು, ಈ ಕೇಸ್ ಬಗ್ಗೆ ಮಾಹಿತಿ ಸಿಗುತ್ತಲೇ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು.. ಘಟನಾ ಸ್ಥಳದಲ್ಲಿ ವಿಧಿ-ವಿಜ್ಞಾನ ತಂಡವೂ ಅಗತ್ಯ ಪರೀಕ್ಷೆ ಮತ್ತು ಸಾಕ್ಷಿಗಳಿಗಾಗಿ ಕಲೆ ಹಾಕುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಮಾಹಿತಿ ಹಂಚಿಕೊಡಿದ್ದಾರೆ.








